ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ..
ಭದ್ರಾವತಿ : ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿನಗರ ಗ್ರಾಮದಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಪಂಚಾಯಿತಿ PDO ಹಾಗೂ ಅಧ್ಯಕ್ಷರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.
ಹಲವು ದಿನಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ ಹಾಗೂ ಕೊಳಚೆ ತುಂಬಿದ ನೀರು ಬರುತಿದೆ, ದಿನ ನಿತ್ಯ ಕಾರ್ಯಕ್ಕೆ ಬಳಸಲು ಆಗದೆ ಕುಡಿಯಲು ಆಗದೆ ಸಂಕಟ ಅನುಭವಿಸುತ್ತಿದ್ದೇವೆ ಸಂಬಂಧ ಪಟ್ಟ ಗ್ರಾಮ ಪಂಚಾಯ್ತಿ ಸದಸ್ಯರ ಗಮನಕ್ಕೂ ತರಲಾಗಿದೆ. ಆದರೆ ಅವರು ಪಂಚಾಯಿತಿ ಅಧಿಕಾರಿಗಳು ಹಾಗೂ ಅಧ್ಯಕ್ಷರ ಗಮನಕ್ಕೆ ತರಲಾಗಿದೆ ಆದರೆ ಏನು ಪ್ರಯೋಜನ ಆಗಿಲ್ಲ ನೀವೆ ಕೇಳಿ ಎಂದು ಸಬುಬು ಏಳುತಿದ್ದಾರೆ. ಕೊಳಚೆ ನೀರುಕುಡಿದು ಬದುಕುವ ಸ್ಥಿತಿ ನಮದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು ಈ ಸ್ವತ್ತು ಮಾಡಲು 2ರಿಂದ 5 ಸಾವಿರ ನಮ್ಮಿಂದ ಪಡೆಯಲಾಗುತಿದೆ ಎಂದು ದುರಿದ್ದಾರೆ. ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ವಾಗುತ್ತಿಲ್ಲ ಆದರೆ ಪಂಚಾಯಿತಿಗೆ ಬರುವ 15 ನೆ ಹಣಕಾಸು, ನರೇಗಾ ಸೇರಿದಂತೆ, ಸಾರ್ವಜನಿಕರು ಕಟ್ಟುವ ತೆರಿಗೆ ಹಣ, ಖಜಾನೆ ಖಾಲಿಯಾಗುತ್ತಿದೆ, ಯಾವುದೇ ಅಭಿವೃದ್ಧಿಯಾಗದೆ ಪಂಚಾಯಿತಿ ಖಜಾನೆ ಖಾಲಿಯಾಗುತಿದೆ ಎಂದು ದೂರಿದರು.
ಇನ್ನು ಇಲಾಖೆಯ ಮೇಲಧಿಕಾರಿಗಳಾದ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳ ಗಮನಕ್ಕೂ ತರಲಾಗಿದೆ ಇನ್ನು ಗ್ರಾಮಸ್ಥರ ಈ ಹೋರಾಟಕ್ಕೆ ನ್ಯಾಯ ಸಿಗುವುದೆ.?