ಸಮಯ ಪ್ರಜ್ಞೆತೋರಿದ ಎ ಎಸ್ ಐ ಹರ್ಷ,ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ನೀಡಿ ಅಭಿನಂದಿಸಿ ಎಸ್ ಪಿ.
ಶಿವಮೊಗ್ಗ : ನಗರದ ಶಿವಪ್ಪ ನಾಯಕ ವೃತ್ತದ ಬಳಿ ಗೊಂದಲವುಂಟಾದ ಸಂದರ್ಭದಲ್ಲಿ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಶ್ರೀ ಹರ್ಷ ಎ.ಎಸ್.ಐ, ಕೋಟೆ ಪೊಲೀಸ್ ಠಾಣೆ ರವರು ಸಮಯ ಪ್ರಜ್ಞೆಯಿಂದ ತಪಿದ ಅನವುತಗಳು.
ದಿನಾಂಕ:- 22-01-2024 ರಂದು ಮಧ್ಯಾಹ್ನ ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದ ಬಳಿ ಗೊಂದಲವುಂಟಾದ ಸಂದರ್ಭದಲ್ಲಿ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಶ್ರೀ ಹರ್ಷ ಎ.ಎಸ್.ಐ, ಕೋಟೆ ಪೊಲೀಸ್ ಠಾಣೆ ರವರು ಸಮಯ ಪ್ರಜ್ಞೆ ತೋರಿ ಅತ್ಯಂತ ಸಂಯಮದಿಂದ ವರ್ತಿಸಿ, ವಿಷಯ ದೊಡ್ಡದಾಗದಂತೆ ಪರಿಸ್ಥಿತಿಯನ್ನು ತಿಳಿಸಿಗೊಳಿಸಿ ಕರ್ತವ್ಯ ಪ್ರಜ್ಞೆಯನ್ನು ಮೆರೆದು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.
ಇವರ ಈ ಉತ್ತಮ ಕಾರ್ಯಕ್ಕಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ, ಈ ದಿನ ದಿನಾಂಕಃ 24-01-2024 ರಂದು ಸಂಜೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಶ್ರೀ ಹರ್ಷ ಎಎಸ್ಐ ರವರಿಗೆ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ನೀಡಿ ಅಭಿನಂದಿಸಿ ಗೌರವಿಸಿದರು.