ದೆಹಲಿ ಹೈ ಡ್ರಾಮಾ ಮಾಡುತಿರುವ ಸಿದ್ದು-ಡಿಕೆಶಿ ಮಾಜಿ ಸಚಿವ ಈಶ್ವರಪ್ಪ ಆರೋಪ..!!
ಶಿವಮೊಗ್ಗ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವರು ಶಾಸಕರುಗಳು ರಾಜ್ಯದ ಜನರ ಹಣದಲ್ಲಿ ಪ್ರವಾಸ ಮಾಡಿ ಲೋಕಸಭೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಜನರ ಹಣವನ್ನು ಬಳಸಿ ಪ್ರವಾಸ ಮಾಡಿ ದೆಹಲಿಯಲ್ಲಿ ಹೈಡ್ರಾಮ ಮಾಡುತಿದ್ದಾರೆ. ತಮ್ಮ ಲೋಕಸಭಾ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಇದಕ್ಕೆ ರಾಜ್ಯದ ಜನರ ಹಣ ವನ್ನೆ ಬಳಸಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಹಣ ಬಂದಿಲ್ಲ ಎಂದು ಬೊಬ್ಬೆ ಹೊಡಿಯುತ್ತೆದ್ದಾರೆ, ಈಗಾಗಲೇ ಕೇಂದ್ರ ಹಣಕಾಸು ಸಚಿವರು ವಿವರಣೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೇಂದ್ರ ಹಣಕಾಸು ಸಭೆಗೆ ಹೋಗಿಲ್ಲ, ಹೋಗಿದ್ದಾರೆ ಕೇಳಬಹುದಿತ್ತು ಸಭೆಗೆ ಹೋಗದೆ ಕೇಂದ್ರದಿಂದ ಹಣ ಬಂದಿಲ್ಲ ಹಣ ಬಂದಿಲ್ಲ ಎಂದು ನೂರುಸಲ ಸುಳ್ಳು ಹೇಳಿ ಅದನ್ನೇ ಸತ್ಯಮಾಡಲು ಹೊರಟ್ಟಿದ್ದಾರೆ. ಈ ರೀತಿಯ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ ಗುಡುಗಿದ್ದಾರೆ.