ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಕೇಂದ್ರದ ಬಜೆಟ್ -ವೇಸ್ಟ್ ಬಜೆಟ್ ಅಂದಿದ್ಯಾಕೆ..?
ಶಿವಮೊಗ್ಗ : ನಗರದ ಜಿಲ್ಲಾ ಕಛೇರಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಕೇಂದ್ರದ ಬಜೆಟ್ ನಿರಾಸದಾಯಕ ವೇ ಸ್ಟ್ ಕಾಟಾಚಾರದ ಬಜೆಟ್ ಇದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಸುಂದರೇಶ್ ದುರಿದ್ದಾರೆ.
ಇದು ಅತ್ಯಂತ ಕಳಪೆ ಕೆಳಮಟ್ಟದ ಬಜೆಟ್ ಇದಾಗಿದೆ ಕೆಳೆದ ಬಜೆಟ್ ನಲ್ಲಿ ಕರೋನಾ ಸಂದರ್ಭದಲ್ಲಿ ಸಂಕಷ್ಟಟ್ಟಕ್ಕೆ ಒಳಗದವರಿಗೆ 20 ಸಾವಿರ ಕೋಟಿ ಸಣ್ಣ ಕೈಗಾರಿಕೆ ಗಳಿಗೆ ಮಿಸಾಲಿಡಲಾಗಿದೆ ಎಂದು ಘೋಷಣೆ ಮಾಡಿದ್ದರು ಆದರೆ ಇದರಿಂದ ಯಾರಿಗೂ ಪ್ರಯೋಜನ ವಾಗಿಲ್ಲ. ಗೋಡಿಸಲು ಮುಕ್ತ ರಾಷ್ಟ್ರ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು ಆದರೆ ಈ ವರೆಗೂ ಜಿಲ್ಲೆಯಲ್ಲಿ ಒಂದೆ ಒಂದು ಮನೆ ನಿರ್ಮಾಣವಾಗಿಲ್ಲ ಎಂದು ದೂರಿದ್ದಾರೆ.
ಗ್ರಾಮೀಣಾಭಿರುದ್ಧಿಗಾಗಿ ಸಾವಿರಾರು ಕೋಟಿ ಹಣ ಮೀ ಸಾಲಿಡಲಾಗಿದೆ ಎನ್ನುತ್ತಾರೆ ಆದರೆ ಗ್ರಾಮೀಣಾಭಿರುದ್ಧಿ ಕ್ಕುಗಿದೆ. ರಕ್ಷಣಾ ಇಲಾಖೆಗೆ ಪ್ರತಿ ವರ್ಷ ಸಾವಿರಾರು ಕೋಟಿ ಮೀ ಸಲಿಡುತ್ತಿದ್ದಾರೆ ಆದರೆ ಆ ಹಣ ಏನುಮಾಡುತ್ತಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ, ಆಡಳಿತದಲ್ಲಿ ಪಾರದರ್ಶಕತೆ ಮಾಯವಾಗಿದೆ ಎಂದು ಏಳಿದ್ದಾರೆ.
ಮಹಿಳೆಯರಿಗೆ ಒತ್ತು ನೀಡಿರುವುದಾಗಿ ಘೋಷಿಸಿದ್ದಾರೆ, ನಿರುದ್ಯೋಗದ ಬಗ್ಗೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ, ಬೆಲೆ ಏರಿಕೆ ಯಿಂದ ಜನ ತತ್ತರಿಸಿದ್ದಾರೆ, ಬಜೆಟ್ ನಲ್ಲಿ ಉಚಿತ ಭರವಸೆ ನೀಡಿಲ್ಲ ಹಾಗಾಗಿ ಇದು ಜನೋಪಕಾರಿ ಬಜೆಟ್ ಅಲ್ಲ. ಬಿಜೆಪಿ ಯವರು ರಾಮ ಮಂದಿರ ಅಜೆಂಡಾ ಕೇಸರಿ ಅಜೆಂಡಾ ಇವಿಎಂ ಬಳಕೆ ಮೇಲೆ ಚುನಾವಣೆ ನಡೆಸಲು ಹೊರಟಿದ್ದಾರೆ ಎಂದರು.