ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ಹೇಳಿದ್ದೇನು..? ಇಲ್ಲಿದೆ ಸಂಪೂರ್ಣ ಮಾಹಿತಿ..!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ರವರು ಮಂಡಿಸಿದ ಬಜೆಟನ್ನು ನಾನು ಸ್ವಾಗತಿಸುತ್ತೇನೆ, ಎಂದು ಹೇಳಿದ ಕೆ ಎಸ್ ಈಶ್ವರಪ್ಪ.
ಕೇಂದ್ರದ ಬಜೆಟ್ ನಲ್ಲಿ ಆರೋಗ್ಯ, ವಸತಿ, ವಿದ್ಯುತ್ ಹಾಗೂ ಪ್ರವಾಸೋದ್ಯಮ ಅಭಿರುದ್ದಿಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ, ಇದು ಬಡವರ ಪರ ಎಂದ ಮಾಜಿ ಸಚಿವ ಈಶ್ವರಪ್ಪ.
ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ಇದು ಸಂಪೂರ್ಣ ಬಡವರ ಪರ ಬಜೆಟ್, ಹೆಣ್ಣುಮಕ್ಕಳಿಗೆ, ಯುವಕರಿಗೆ,ರೈತರಿಗೆ, ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ ಎಂದರು.
ಭಾರತ್ ಜೋಡೋ ಕಾರ್ಯಕ್ರಮ ಮಾಡಿದವರಿಂದಲೇ ಭಾರತ್ ತೋಡೋ ಕಾರ್ಯಕ್ರಮ ಹೇಳಿಕೆ ನೀಡಲಾಗುತಿದೆ
ಡಿಕೆ ಸುರೇಶ್ ರವರು ದೇಶ ಒಡೆಯುವಂತ ಹೇಳಿಕೆ ಯನ್ನು ನೀಡಿದ್ದಾರೆ ಅವರಿಗೆ ಕೇಂದ್ರ ಬಜೆಟ್ ಬಗ್ಗೆ ಅಸಮಾಧಾನ ವಿದ್ದರೆ ರಾಜೀನಾಮೆ ನೀಡಲಿ, ಆದರೆ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂದು ದೇಶ ವಿಭಜನೆ ಯಾಗಬೇಕು ಎನ್ನುವ ಸಂಸ್ಕೃತಿ ನಮ್ಮದ್ದಲ್ಲ ಅದು ಕಾಂಗ್ರೆಸ್ ನಾ ಜಿನ್ನಾ ಸಂಸ್ಕೃತಿ. ಈ ಹೇಳಿಕೆ ಯನ್ನು ಅವರ ಸಹೋದರ ಡಿಕೆ ಶಿವಕುಮಾರ್ ಒಪ್ಪಿದ್ದಾರೆ, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹೇಳಿಕೆ ಯನ್ನು ಸ್ವಾಗತಿಸಿಲ್ಲ, ಇದರ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ