ಕುವೆಂಪು ವಿ ವಿ ಈ ಐದು ಅಧಿಕಾರಿಗಳಿಗೆ ಎದುರಗಲಿದೆಯಾ ಸಂಕಷ್ಟ..!!
ಭದ್ರಾವತಿ : ಶಂಕರಘಟ್ಟ ಕುವೆಂಪು ವಿಶ್ವ ವಿದ್ಯಾನಿಲಯ ದಲ್ಲಿ ಈ ಹಿಂದೆ ಇದ್ದ ಈ ಐದು ಅಧಿಕಾರಿಗಳ ಆಡಳಿತ ಅವಧಿಯಲ್ಲಿ ಹಲವಾರು ಹಗರಣಗಳು ಸಾಬೀತ್ತಾಗಿದ್ದು ಈ ಐವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರಕಾರ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ಅದೇಶಿಸಿದೆ.
SCSP 4.25 ಕೋಟಿ ಅನುದಾನ ದುರ್ಬಳಕೆ..!
ಕುವೆಂಪು ವಿ ವಿ ಯಲ್ಲಿಪರಿಶೀಷ್ಟ ಜಾತಿಯಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಮ್ ಒದಗಿಸಲು2021/ 2022 ಸಾಲಿನಲ್ಲಿ ಬಿಡುಗಡೆ ಮಾಡಿರುವ SCSP 4.25 ಕೋಟಿ ಅನುದಾನ ವನ್ನು ದುರುಪಯೋಗ ಮಾಡಿಕೊಂಡಿದ್ದು. ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಕೇಸ್ ದಾಖಲಿಸಲು ಸಮಾಜ ಕಲ್ಯಾಣ ಇಲಾಖೆಗೆ ಸರ್ಕಾರ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ಅದರಂತೆ ನಿವೃತ್ತ ಕುಲಪತಿ ಪ್ರೊ. ವೀರಭದ್ರಪ್ಪ ಬಿ. ಪಿ ಈ ಹಿಂದಿನ ಆಡಳಿತ ವಿಭಾಗದ ಕುಲಸಚಿವರಾದ ಅನುರಾಧ ಜಿ, ಈ ಹಿಂದೆ ಪ್ರಭಾರ ಕುಲಸಚಿವರಾದ ಪ್ರೊ.ಗೀತಾ ಸಿ. ಹಿಂದಿನ ಹಣಕಾಸು ಅಧಿಕಾರಿಯಾದ ರಾಮಕೃಷ್ಣ ಎಸ್. ಹಾಗೂ ಡಾ. ವೈ ಎಲ್ ರಾಮಚಂದ್ರ ಇವರ ವಿರುದ್ದ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ಈ ಐವರ ವಿರುದ್ಧ ತೆಗೆದುಕೊಂಡಿರುವ ಕ್ರಮದ ಬಗ್ಗೆ ಸರ್ಕಾರಕ್ಕೆ ವರದಿ ನೀಡುವಂತೆ ತಿಳಿಸಲಾಗಿದೆ.