ಆಹಾರ ಇಲಾಖೆ ಮತ್ತು ಆಹಾರ ಗೋದಾಮಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಖಂಡಿಸಿ ಜೆಡಿಯು ಮುಖಂಡ
ಶಶಿಕುಮಾರ್ ಗೌಡ ಪ್ರತಿಭಟನೆ..
ಭದ್ರಾವತಿ : ನಗರ ಆಹಾರ ಇಲಾಖೆ ಮತ್ತು ಆಹಾರ ಗೋದಾಮಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಖಂಡಿಸಿ.ಭದ್ರಾವತಿಯ ಆಹಾರ ಇಲಾಖೆಯಲ್ಲಿ ಅವ್ಯವಹತವಾಗಿ ಭ್ರಷ್ಟಚಾರವು ತಾಂಡವವಾಡುತ್ತಿದ್ದು,ಇದರ ವಿರುದ್ಧ ನಗರ ಆಹಾರ ಕಛೇರಿ ಮುಂದೆ ಅನಿರ್ದಿಷ್ಟ ಪ್ರತಿಭಟನಾ ಧರಣಿ ನಡೆಸಿದ ಜೆಡಿಯು ಮುಖಂಡ ಶಶಿಕುಮಾರ್ ಗೌಡ.
ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳ ವಿರುದ್ದ ದೂರು ನೀಡಿದರು ಯಾವುದೇ ಪ್ರತಿಕ್ರಿಯೆ ನೀಡದೆ ಅರ್ಜಿಯನ್ನು ತಮ್ಮ ಮನಸ್ಸಿಗೆ ಬಂದಂತೆ ಅಂತ್ಯಗೊಳಿಸುತ್ತಿದ್ದಾರೆ, ಎಂಬ ದೂರು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ.
ನೌಕರರು ಸೇವೆಯಲ್ಲಿರುವ ಸಂದರ್ಭದಲ್ಲಿ ಅಶಿಸ್ತು ಪ್ರದರ್ಶನ ಹಾಗೂ ದುರ್ವತನೆ, ಅಕ್ರಮ ಪರ ವರದಿ ನೀಡುವುದು, ಇವರು ಜಿಲ್ಲಾ ಉಪನಿರ್ದೇಶಕರ ಗಮನಕ್ಕೂ ಬರದಂತೆ ಜಿಲ್ಲೆಯ ಹಲವು ನ್ಯಾಯಬೆಲೆ ಅಂಗಡಿಗಳ ವಿರುದ್ಧ ಅನಾಮಧೇಯ ದೂರು ಬರೆದು ಇವರೆ ಉತ್ತರ ಬರೆಯಲು ಅಂಗಡಿ ಮಾಲೀಕರಿಂದ ಸಹಕಾರ ಕೋರುವ ಕುರಿತು ಸಾರ್ವಜನಿಕ ವಲಯದಲ್ಲಿ ಬಹಳಷ್ಟು ದೂರು ಕೇಳಿಬರತೊಡಗಿದೆ. ಇದಕ್ಕೆ ಹಲವು ವರ್ಷಗಳಿಂದ ಕೇಂದ್ರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ, ಗೀತಾ ಇವರನ್ನು ಇಲಾಖೆಯಿಂದ ತನಿಖೆ ನಡೆಸಿ ಸೇವೆಯಿಂದ ವಜಾಮಾಡಬೇಕೆಂದು ಶಶಿಕುಮಾರ್ ಗೌಡ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಕಾಗದನಗರದ ತಿರುಮಲ ನ್ಯಾಯಬೆಲೆ ಅಂಗಡಿ ಮಾಲೀಕರು ಒಂದು ಪ್ರಾಧಿಕಾರದ ಅಡಿ ಎರಡೆರಡು ಕಡೆ ಪ್ರದೇಶದಲ್ಲಿ ಅಕ್ರಮವಾಗಿ 5ವರ್ಷಗಳಿಂದ ಮಳಿಗೆ ತೆರೆದು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಕಾಗದನಗರದ ಸಾರ್ವಜನಿಕರಿಗೆ/ಕೂಲಿ ಕಾರ್ಮಿಕರೆ ಹೆಚ್ಚಿರುವ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಸಮಯಕ್ಕೆ ಸರಿಯಾಗಿ ತೆರೆಯದೆ ತಿಂಗಳಲ್ಲಿ ಕೇವಲ 3 ದಿನ ಪಡಿತರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.