ವಾಯುವ್ಯಾ ಸಾರಿಗೆಯಲ್ಲಿ ನಗದು ರಹಿತ ಪ್ರಯಾಣಕ್ಕೆ ಅವಕಾಶ ಡಿಜಿಟಲೀಕರಣದತ್ತ ಸಾರಿಗೆ ಇಲಾಖೆ..!
ಶಿರಸಿ : ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಬೇಕಾದರೆ ಕೈಯಲ್ಲಿ ಹಣ ಇಲ್ಲದಿದ್ದರೆ ಬಸ್ ನಲ್ಲಿ ಪ್ರಯಾಣ ಮಾಡುವುದು ಕಷ್ಟ, ಅದರಲ್ಲೂ ಸರಕಾರಿ ಬಸ್ ನಲ್ಲಿ ಚಿಲ್ಲರೆ ಸಮಸ್ಯೆ ಅತಿಹೆಚ್ಚು, ಅದಕ್ಕಿಗ ಸಾರಿಗೆ ಇಲಾಖೆ ಈಗೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಕೇಂದ್ರ ಸರಕಾರದ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು ಮೊದಲ ಹಂತದಲ್ಲಿ 500 ಕಂಡೆಕ್ಟರ್ ಗಳಿಗೆ ಕ್ಯೂಆರ್ ಕೋಡ್ ಸಿದ್ದಪಡಿಸಿ ಕೊಟ್ಟಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಯುಪಿಐ ಕೋಡ್ ನಿಂದ ಹಣ ಸಂದಾಯ ಮಾಡಿ ಟಿಕೆಟ್ ಪಡೆದು ಪ್ರಯಾಣಿಸಬವುದಾಗಿದೆ.
ಹುಬ್ಬಳ್ಳಿ ವಾಯುವ್ಯಾ ಸಾರಿಗೆ ಇಲಾಖೆ ಇಂಥದೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ, ಹುಬ್ಬಳ್ಳಿ ನಂತರ ಮೊದಲ ಬಾರಿಗೆ ಶಿರಸಿ ಯಲ್ಲಿ ಕ್ಯೂಆರ್ ಕೋಡ್ ಬಳಸಿ ಪ್ರಯಾಣದ ಹಣ ಪಾವತಿಸಿ ಸರಕಾರಿ ಬಸ್ ನಲ್ಲಿ ಪ್ರಯಾಣಿಸಲು ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟಿದೆ.
ಈ ಮೂಲಕ ವಾಯುವ್ಯಾ ಸಾರಿಗೆ ಡಿಜಿಟಲಿ ಕರಣವಾಗಿ ಒಂದು ಹೆಜ್ಜೆ ಮುಂದೆ ಇಡುವ ಮೂಲಕ ಮುಂದೆ ಸಾಗಿದೆ ಆದುನಿಕ ಜಗತ್ತಿನ ಪ್ರಯಾಣಿಕರ ಪ್ರಯಾಣ ವನ್ನು ನಗದು ರಹಿತ ಸುಲಭ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಾರಿಗೆ ಇಲಾಖೆ ತಿಳಿಸಿದೆ.