ಪ್ರೇಮಿಗಳ ದಿನ ಅಲ್ಲ ರಾಷ್ಟ್ರ ಪ್ರೇಮಿಗಳ ದಿನವನ್ನಾಗಿ ಆಚರಿಸಿದ ಸುಭಾಷ್ ಯುವ ಸೇನೆ..!
ಭದ್ರಾವತಿ : ನಗರದ ಗಾಂಧಿ ಸರ್ಕಲ್ ಬಳಿ ಸುಭಾಷ್ ಯುವ ಸೇನೆ ವತಿಯಿಂದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ದಾoಜಲಿ ಸಲ್ಲಿಸಲಾಯಿತು.
ಯುವ ಸಮಾಜಕ್ಕೆ ಪ್ರೇಮಿಗಳ ದಿನದ ಬದಲು ರಾಷ್ಟ್ರ ಪ್ರೇಮಿಗಳ ದಿನ ಎಂದು ವಿಭಿನ್ನವಾಗಿ ಆಚರಿಸುವ ಮೂಲಕ ದೇಶ ಪ್ರೇಮದ ಮಹತ್ವ ತಿಳಿಸಲಾಯಿತು.
ಸುಭಾಷ್ ಯುವ ಸೇನೆಯಿಂದ ಹಲವಾರು ವರ್ಷ ಗಳಿಂದ ತಾಲೂಕಿನಲ್ಲಿ ಸಮಾಜ ಮುಖಿ ಕೆಲಸ ಸಾರ್ವಜನಿಕ ಸೇವೆ ಹಾಗೂ ದೇಶ ಪ್ರೇಮ ತೋರುವಂತ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತ ಜನರ ಮನ ಸೆಳೆದಿದೆ.
ಕಾರ್ಯಕ್ರಮದಲ್ಲಿ ಸುಭಾಷ್ ಯುವ ಸೇನೆ ಮುಖಂಡ ಮಣಿಕಂಠ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷರಾದ ದೇವರಾಜ್, Rss ಪ್ರಮುಖರಾದ ಸೀತಾರಾಮಪುರ ಚಂದ್ರಶೇಖರ್, ಕೇಶವ್ , ಬಿಜೆಪಿ ಮುಖಂಡರಾದ ಧನುಷ್, ರಾಜಶೇಖರ್ ಹಾಗೂ ಬಜರಂಗದಳ ಪ್ರಮುಖ ಶ್ರೀಕಾಂತ್, ಪ್ರದೀಪ್ ಇತರರು ಉಪಸ್ಥಿತರಿದ್ದರು.