ಪಾಕಿಸ್ತಾನ ದಲ್ಲಿ ಬಂದಿಯಾಗಿರುವ ಭಾರತೀಯ ಅಧಿಕಾರಿಗಳು ಮತ್ತು ನಾಗರೀಕರ ಬಿಡುಗಡೆಗೆ ಒತ್ತಾಯಿಸಿ ಮನವಿ…!
ಕತಾರ್ ದೇಶದಲ್ಲಿ ಭಾರತೀಯ ನೌಕಪಡೆಯ ಅಧಿಕಾರಿಗಳದ ನವತೇಜ್ ಗಿಲ್ ವಶಿಷ್ಠ ಯಾದವ್ ಸೇರಿದಂತೆ 8 ಮಂದಿ ಭಾರತೀಯ ನೌಕಾಪಡೆಯ ಅಧಿಕಾರಿಗಳನ್ನು ಬಂಧಿಸಿ ಅಲ್ಲಿನ ನ್ಯಾಯಾಲಯ ಗಲ್ಲಿಗೇರಿಸಲು ಆದೇಶ ಮಾಡಿತ್ತು ಆದರೆ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಹಾಗೂ ಭಾರತದ ವಿದೇಶಾಂಗ ನೀತಿಯ ಪ್ರಭುದ್ಧತೆ ಮತ್ತು ಪ್ರಧಾನ ಮಂತ್ರಿ ಮೋದಿ ಯವರ ಸಮಯ ಪ್ರಜ್ಞೆ ಯಿಂದ ಭಾರತೀಯ ಸೈನಿಕರನ್ನು ಕಾರತರಲಾಗಿದೆ.
ಭಾರತೀಯ ಸೈನಿಕರ ಮೇಲೆ ಇರುವ ಗೌರವ ಮತ್ತು ನಂಬಿಕೆ ವಿಶ್ವಾಸಕ್ಕೆ ದೇಶ ವಿದೇಶಗಳಲ್ಲಿಯೂ ಕೂಡ ಭಾರತೀಯರಿಗೆ ಮಾನ್ಯತೆ ಗೌರವ ಸಿಗುತ್ತಿರುವುದು, ಪ್ರಪಂಚದಲ್ಲಿ ದೇಶಕ್ಕೆ ಹೆಚ್ಚಾದ ಗೌರವ. ಎಂದು ಜೆಡಿಯು ಮುಖಂಡ ಶಶಿಕುಮಾರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಪಾಕಿಸ್ತಾನದಲ್ಲಿ ಬಂದಿಯಾಗಿರುವ ನೌಕಾಪಡೆಯ ಮಾಜಿ ಅಧಿಕಾರಿ ಕುಲುಭೂಷಣ್ ಜಾದವ್ ಸೇರಿದಂತೆ ಅನೇಕ ಭಾರತೀಯ ನಾಗರಿಕರು ಪಾಕಿಸ್ತಾನದ ಜೈಲಿನಲ್ಲಿ ಸೇರ ವಾಸ ಅನುಭವಿ ಸುತ್ತಿದ್ದು ಕತಾರ್ ದೇಶದಲ್ಲಿನ ನೌಕಾಪಡೆ ಅಧಿಕಾರಿಗಳನ್ನು ಬಿಡುಗಡೆಗೊಳಿಸಿದಂತೆಯೇ ಪಾಕಿಸ್ತಾನದಲ್ಲಿ ಬಂದಿಯಾಗಿರುವ ಕುಲಭೂಷಣ್ ಜಾದವ್ ಸೇರಿದಂತೆ ಎಲ್ಲಾ ಭಾರತೀಯ ನಾಗರಿಕರನ್ನು ಬಿಡುಗಡೆಗೊಳಿಸ ಕೊಡಬೇಕೆಂದು, ಪ್ರಧಾನ ಮಂತ್ರಿಗಳಿಗೆ ಭದ್ರಾವತಿ ತಹಶೀಲ್ದಾರ್ ಮೂಲಕ ಮನವಿ ನೀಡಿದ್ದಾರೆ.