ಗೋ ಹಂತಕರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹಿಂಜವೇ ಪ್ರತಿಭಟನೆ..!
ಭದ್ರಾವತಿ : ತಾಲೂಕು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಭದ್ರಾವತಿ ಡಿವೈಎಸ್ ಪಿ ಕಚೇರಿ ಮುಂಭಾಗದಲ್ಲಿ ಗೋ ಹಂತಕರನ್ನು ಬಂಧಿಸಬೇಕು ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟಿಸಲಾಯಿತು.
ಭದ್ರಾ ನದಿ ಹೊಳೆಯ ದಡದಲ್ಲಿ ಸಿಕ್ಕಂತಹ ಸುಮಾರು ಮೂರು ಟನ್ ನಷ್ಟು ಗೋಮಾಂಸದ ಕುರುಹುಗಳು ಸಿಕ್ಕಿದರು ಇಲ್ಲಿಯವರೆಗೂ ಗೋ ಹತ್ಯೆ ಮಾಡಿರುವ ಆರೋಪಿಗಳನ್ನು ಬಂಧಿಸಿಲ್ಲವೆಂದು ಭಾನುವಾರ ರಾತ್ರಿ ಒಳಗೆ ಬಂಧಿಸಬೇಕು ಬಂಧಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಜಾಗೃತ ಹಿಂದೂ ಸಮಾಜ ರಸ್ತೆ ಇಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಪ್ರತಿಭಟನೆ ದಿನಾಂಕವನ್ನು ಪತ್ರಿಕ ವರದಿ ಮಾಡುವ ಮೂಲಕ ತಿಳಿಸುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ್ ದೇವರಾಜ್ ಅರಳಿಹಳ್ಳಿ ಅವರು ತಿಳಿಸಿದ್ದಾರೆ. ಹಿಂದೂ ಸಂಘಟನೆ ಪ್ರಮುಖರಾದ ಉಮೇಶ್, ಶಿವಕುಮಾರ್, ಮನು, ಗೋಕುಲ್ ಕೃಷ್ಣ, ಕೇಶವ್, ಧನುಷ್, ಕಿರಣ, ಶ್ರೀಕಾಂತ, ಕೃಷ್ಣ, ಅರುಣ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.